Sthanika
Event
- Title:
- ಋಗ್ ಉಪಾಕರ್ಮ ಹಾಗೂ ನಾಗರ ಪಂಚಮಿ ಆಚರಣೆ
- When:
- 28.07.2017
- Category:
- Temple
Description
ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ
ಋಗ್ ಉಪಾಕರ್ಮ ಹಾಗೂ ನಾಗರ ಪಂಚಮಿ ಆಚರಣೆ - ತಾ: 28-07-2017
ಪರಮಪೂಜ್ಯ ಶ್ರೀಮದ್ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಹಾಗೂ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಪರಿಪೂರ್ಣಾನುಗ್ರಹದಿಂದ ಸ್ವಸ್ತಿ ಶ್ರೀ ಹೇವಿಳಂಬಿ ನಾಮಸಂವತ್ಸರದ ದಿನಾಂಕ 28-07-2017 ಶುಕ್ರವಾರ ಶ್ರಾವಣ ಶುಕ್ಲ ಪಂಚಮಿಯಂದು ಋಗ್ ಉಪಾಕರ್ಮ ಹಾಗೂ ನಾಗರ ಪಂಚಮಿಯ ಆಚರಣೆಗಳು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ಭಗವತ್ ಸಂಕಲ್ಪದಂತೆ ನಡೆಯಲಿರುವುವು.
ಸಮಾಜ ಬಾಂಧವರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀದೇವರ ಹಾಗೂ ಶ್ರೀ ನಾಗದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸವಿನಯ ಪ್ರಾರ್ಥನೆ.
ಋಗ್ ಉಪಾಕರ್ಮದಲ್ಲಿ ಭಾಗವಹಿಸುವವರು ಪಂಚ ಪಾತ್ರೆ ಮತ್ತು ಉದ್ಧರಣೆಗಳನ್ನು ತರಬೇಕಾಗಿ ವಿನಂತಿ.
ಕಾರ್ಯಕ್ರಮಗಳ ವಿವರ:
ಬೆಳಿಗ್ಗೆ 6:00 ಕ್ಕೆ: ಋಗ್ ಉಪಾಕರ್ಮ
ಬೆಳಿಗ್ಗೆ 8:30 ಕ್ಕೆ: ನಿತ್ಯ ಪೂಜೆ
ಬೆಳಿಗ್ಗೆ 9:00 ಕ್ಕೆ: ಉಪಹಾರ
ಬೆಳಿಗ್ಗೆ 9:30 ಕ್ಕೆ: ಗಣಪತಿ ಹೋಮ
ಬೆಳಿಗ್ಗೆ 10:30 ಕ್ಕೆ: ಆಶ್ಲೇಷ ಬಲಿ ಮತ್ತು ಹೋಮ
ಬೆಳಿಗ್ಗೆ 12:00 ಕ್ಕೆ: ಪೂರ್ಣಾಹುತಿ
ಮಧ್ಯಾಹ್ನ 12:15 ಕ್ಕೆ: ಶ್ರೀ ನಾಗದೇವರಿಗೆ ತಂಬಿಲ ಪೂಜೆ
ಮಧ್ಯಾಹ್ನ 12:30 ಕ್ಕೆ: ಶ್ರೀ ದೇವರಿಗೆ ಮಹಾಪೂಜೆ, ಮಹಾ ಮಂಗಳಾರತಿ.
ಮಧ್ಯಾಹ್ನ 1:30 ಕ್ಕೆ ತೀರ್ಥ ಪ್ರಸಾದ ವಿನಿಯೋಗ
ಮಹಾ ಪ್ರಸಾದ ಭೋಜನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು
ಸೇವಾ ವಿವರ
ಸರ್ವ ಸೇವೆ: ರೂ. 1001/-
ಅನ್ನ ಸಂತರ್ಪಣೆ: ರೂ. 501/-
ಆಶ್ಲೇಷ ಬಲಿ: ರೂ. 300/-
ತಂಬಿಲ ಸೇವೆ: ರೂ. 200/-
ವಿಶೇಷ ಪೂಜೆ: ರೂ. 101/-
ಆಡಳಿತ ಮಂಡಳಿ-ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ – ಬೆಂಗಳೂರು